Monday, July 18, 2011

ಹೊಸತು ..!

ಆದರ್ಶ, ಆಧ್ಯಾತ್ಮಗಳೇಕೆ
ನನ್ನ ಅರಿಯಲು
ಈ ಜೀವನ ಸಾಕು!
*************************
ನೀ ನನ್ನ ಮನದ
ಮಾತಾಗು ಮೊದಲು
ಪ್ರೀತಿ-ಪ್ರೇಮದ
ಹುಚ್ಚು ಹೊಳೆಯಲಿ
ಮಾತು ಮರೆತು
ಮೌನಿಯಾಗುವ ಮುನ್ನ.
**********************
ಕಮಲದಂತೆ
ನೀರಿನಲ್ಲಿದ್ದು ಸ್ವಚ್ಛತೆಯ
ಕಾಪಾಡಲಿಚ್ಚಿಸುವ
ಹೆಣ್ಣು ಸಹ
ತನ್ನವನ
ಬಾಹು ಬಂಧನದ
ಪ್ರೇಮಕೆ ಪರಿತಪಿಸುವಳು
**************************

ನಿರ್ದಿಷ್ಟ ರೋಗದ
ಲಕ್ಷಣವಿಲ್ಲದಿದ್ದರು
ಬಗೆಹರಿಯದ
ಮಾರಕ ರೋಗವಿಹುದು
ಮನದಲಿ 'ಅನುಮಾನದ'
ಹೆಸರಿನಲ್ಲಿ...
**************************************************************************

Sunday, July 3, 2011

ದಾರಿ ಹೋಕ


ದಾರಿಯಲಿ ಕೇಳಿದ
ಹಳೆಯ ಹಾಡಿನ
ಗುಂಗಿನಲಿ ಮತ್ತೆ
ಉಮ್ಮಳಿಸಿ ಬರಲು
ನೆನಪು, ದಾರಿಹೋಕ
ಬಿಟ್ಟು ಹೋದ ಹಾಗೇ
ಬಿಮ್ಮನೆ ಬೀರಿದ ನಗೆಯ
ಮನದ ಗೋಡೆಯ ಮೇಲೆ.

ಸ್ಮಶಾನದ ಸಮಾದಿಯ
ಮೇಲೆಲ್ಲ ನಳನಳಿಸುತಿಹ
ತುಂಬೆಯ ಬೇರಿನ
ಆಳದಲಿ ಹುದುಗಿಹ
ಕಳೆಬರಹದ ಛಾಯೆ
ಹೂವಾಗಿ ನಲಿಯುತಿದೆ
ಇಂದು.
ನನ್ನೊಳಗೆ ಬಿತ್ತ
ಬಯಕೆಯ ಬೀಜ
ಮೊಳೆತು ಕನಸ
ಹೆಮ್ಮರವಾಗಲೇ ಇಲ್ಲ.
ಭ್ರಮೆಯ ಕನ್ನಡಿ
ಒಡೆದಾಗ ವಾಸ್ತವವೆಲ್ಲ
ಚಿದ್ರ ಚಿದ್ರಗೊಂಡ
ಬಿಂಬ.

ಅಲ್ಲೆಲ್ಲೋ ಬೆಟ್ಟದ
ಮರೆಯಲ್ಲಿ ತುಂತುರು ಮಳೆ
ಬೇರಿಗೆ ಇಳಿಯುತಿಹ ಹನಿ.