
"ಯಾರು ಹೆದರೋದು ಬೇಡ,ನಮ್ಮ ರಾಜ್ಯದಲ್ಲಿ ಇನ್ನು ಸೋಂಕು ಜಾಸ್ತಿ ಹರಡಿಲ್ಲ, ನಮ್ಮಲ್ಲಿ ಸತ್ತವರ ಸಂಖ್ಯೆ ಕಡಿಮೆ,ನಾನು ಬಳ್ಳಾರಿಯಿಂದಲೇ ದಿನವೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ, ನಮ್ಮಲ್ಲಿ ಯಾವ ತೊಂದರೆಯೂ ಆಗೋಲ್ಲ, ಸರ್ಕಾರ ಅದಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ನೆರವು ನೀಡುತ್ತದೆ" ಹೀಗೆ ರಾಜ್ಯದ ಆರೋಗ್ಯ ಮಂತ್ರಿ ಹೇಳಿದ್ದನ್ನೇ ಹೇಳುತ್ತ,H1N1 ತಡೆಗೆ ತಾನು ಕೈಗೊಂಡ ಒಂದೇ ಒಂದು ಕ್ರಮದ ಬಗ್ಗೆಯೂ ಸರಿಯಾದ ವಿವರಣೆ ನೀಡದೆ ರಾಜಕಾರಣಿಗಳು ಹೇಳುವ ಮಾಮೂಲು ಶೈಲಿಯಲ್ಲೇ,ಮಾತನಾಡುತ ಉದಾಸೀನತೆಯ ಪರಾಕಾಷ್ಟೆ ಮೆರೆಯುವ ಇಂತವರನ್ನ ನೋಡಿದರೆ ಇವೆಲ್ಲ ನಡೆಯೋದು ಭಾರತದಲಿ ಮಾತ್ರವೇನೋ ಅನಿಸುತ್ತದೆ ನನಗೆ.ಹೇಳಿಕೊಳ್ಳಲು ಮಾತ್ರ ನಮ್ಮದು ಪ್ರಪಂಚದ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಆದರೇ ಅದರ ಒಳಗಿರುವುದೆಲ್ಲ ಟೊಳ್ಳು ಭರವಸೆಗಳ ಜಾಡು.ಕೆಟ್ಟ ರಾಜಕೀಯ ವ್ಯವಸ್ಥೆ ದೇಶದ ಎಲ್ಲ ಆಯಾಮಗಳನು ತನ್ನ ಭದ್ರಬಾಹುವಿನೊಂದಿಗೆ ಹಾಳುಗೆಡುವುತ್ತಲೇ ಸಾಗುತ್ತಿದೆ.ಜನ ನಾವುಗಳು ಮಾತ್ರ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ ಎಚ್ಚರದಲ್ಲೂ ಪ್ರಜ್ಞಾಹೀನರಂತೆ ಇದಾವುದು ನಮಗೆ ಸಂಭಂದಿಸಿದ ವಿಷಯವಲ್ಲ ಎಂದು ಜಾಣಕುರುಡುತನ ಪ್ರದರ್ಶಿಸುತ, ಸ್ವಕಾರ್ಯದಲಿ ಮುಳುಗಿ ಹೋಗಿದ್ದೇವೆ.
ನಮ್ಮ ಜನಗಳಿಂದ ಚುನಾಯಿತವಾದ ಸರ್ಕಾರ ಅರ್ಥಾತ್ ಈ ಜನಪ್ರತಿನಿಧಿಗಳಿಗೆ,ಸಾಮಾಜಿಕ ಜವಬ್ದಾರಿ ಎಂಬುದು ಏನು? ಸಾಮಾಜಿಕ ಕಾಳಜಿ ಎಂದರೆ ತಿಳಿದಿದೆಯೇ ನಿಮಗೆ ಮಹಾನುಭಾವರೇ? ಎಂದು ಮೊದಲು ಕೇಳಿ ತಿಳಿಯಬೇಕು.ಅವರ ಪ್ರಕಾರ ಸಮಾಜದಲ್ಲಿ ಸಮಸ್ಯೆಗಳು ಇದ್ದೆ ಇರುತ್ತವೆ,ಸಮಾಜಕ್ಕೆ ಸಮಸ್ಯೆಗಳ ಬರವೇ? ಅವುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬಸ್ವಭಾವದ,ದಪ್ಪ ಚರ್ಮದ ರಾಜಕಾರಣಿ,ಮಂತ್ರಿ ಮಹೋದಯರಿಗೆಂದು ತಿಳಿಯದು ಜನ ಸಾಮಾನ್ಯನ ಕಷ್ಟ ಕಾರ್ಪಣ್ಯಗಳು.ರಾಜ್ಯದ ಒಬ್ಬ ಆರೋಗ್ಯ ಮಂತ್ರಿ "ನಮ್ಮ ರಾಜ್ಯದಲ್ಲಿ ಇನ್ನು ಹೆಚ್ಚು ಜನ ಸತ್ತಿಲ್ಲ,ಪಕ್ಕದ ಪುಣೆಯಲ್ಲಿ ಹರಡಿರೋವಷ್ಟು ತೀವ್ರವಾಗಿ ರೋಗ ನಮ್ಮ ರಾಜ್ಯದಲ್ಲಿ ಹರಡಿಲ್ಲ"ಅಂದರೆ ಜನರೆಲ್ಲ ರೋಗದಿಂದ ನರಳಿ ಸಾಯಬೇಕು,ಇವರು ಸಾಂಕ್ರಾಮಿಕ ರೋಗವನ್ನು ತಡೆಯುವ ಕ್ರಮ ಕೈಗೊಳ್ಳಲು ಅನ್ನೋದು ಇವರ ಮಾತಿನ ಅರ್ಥವೇನೋ,ಸುಮ್ಮ ಸುಮ್ಮನೆ ಮುಂಜಾಗ್ರತ ಕ್ರಮ ಕೈಗೊಂಡು ರೋಗ ಹರಡದಿದ್ದರೆ ಅವರ ಶ್ರಮವೆಲ್ಲ ವ್ಯರ್ಥವಾಗುತ್ತೆ,ಅನ್ನೋದು ಮಂತ್ರಿಗಳ ಯೋಚನೆ ಇರಬೇಕು.ಅವರ ಬುದ್ದಿವಂತಿಕೆಯನ್ನ ಮೆಚ್ಚಲೇ ಬೇಕು ಬಿಡಿ.
ನಾವು ರೋಗ ನಿಯಂತ್ರಿಸಲು ಎಷ್ಟು ಸಾದ್ಯವೋ ಅಷ್ಟು ಮುಂಜಾಗ್ರತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ ಎಂದು H1N1 ರೋಗದ ಬಗ್ಗೆ ಭಾಷಣ ಮುಂದುವರಿಸುತ್ತಲೇ 'ಅಗತ್ಯವಿರುವ ಹೆಚ್ಚುವರಿ ಸಿಬ್ಬಂಧಿಯನ್ನು ನೇಮಿಸಿಕೊಳ್ಳಲು ಕ್ರಮ ಜರುಗಿಸಲಾಗುವುದು, ಕೇಂದ್ರದಿಂದಲೂ ಇನ್ನು ಹೆಚ್ಚಿನ ಔಷಧ ಸವಲತ್ತನ್ನು ಪಡೆಯಲಾಗುವುದು'.ಎಂಬ ಆರಿಕೆಯ ಉತ್ತರಗಳನ್ನು ನೀಡುತ್ತಲೇ ಸಾಗುವವನು ನಮ್ಮ ಘನ ಸರ್ಕಾರದ ಆರೋಗ್ಯ ಮಂತ್ರಿಯೂ,ಅವನ ಕಾರ್ಯ ವೈಕರಿಯೂ ಅದ್ಭುತವಾದುದ್ದೆ ಅಲ್ಲವೇ.
ನೂರಾರು ಸಾಮನ್ಯ ಜನರು H1N1 ರೋಗದಿಂದ ಸತ್ತರೆ ಮಾತ್ರ ಅದನ್ನು ತಡೆಯುವ ಗಂಭೀರ ಕ್ರಮ ಜರುಗಿಸೋದು, ಒಬ್ಬ ಸತ್ತರೆ ಪಾಪ!ಅದು ಸಾವಲ್ಲ.ಹೇಳಿಕೊಳ್ಳಲು ಸಂಖ್ಯೆಯು ಅಲ್ಲ.ಲಕ್ಷ,ಸಾವಿರಗಟ್ಟಲೆ ವೋಟ್ ಬ್ಯಾಂಕಿನ ರೀತಿ ಸಾವು ಸಹ ಸಂಖ್ಯಾ ಬಲವನ್ನು ಪ್ರದರ್ಶಿಸಿದರೆ ಮಾತ್ರ ಅವರಿಗೆ ಅರಿವಾಗುವುದು,ರೋಗ ಯಾಗೆ ತೀವ್ರ ತರವಾಗಿ ಸಾಮನ್ಯ ಜನರ ಜೀವವನ್ನು ಬಲಿತೆದುಕೊಳ್ಳುತ್ತಿದೆ ಎಂದು.ಇಲ್ಲವಾದರೇ ಮಂತ್ರಿಗಳ ಪ್ರಕಾರ ಸಮಾಜದಲ್ಲಿ ಇವೆಲ್ಲ ಮಾಮೂಲು ಘಟನೆ.ಸಾಮನ್ಯನೊಬ್ಬನ 'ನೋವು''ಸಾವು' ಅದರ ವೇದನೆ ಎಲ್ಲ ಅವರಿಗೆ ಹೇಗೆ ತಿಳಿಯಬೇಕು.ಅವರೇನು 'ಸಾಮನ್ಯಜೀವೆಗಳೇ' ಅವೆಲ್ಲ ಅವರಿಗೆ ಅರ್ಥವಾಗೋಕೆ, ಅಸಮಾನ್ಯರು ಅವರು "ರಾಜ್ಯದ ಮಂತ್ರಿಗಳು"ಪ್ರಜೆಯಲ್ಲ, ಪ್ರಜೆಯಾಗಿದ್ದರೆ ಅವರೇಕೆ ಹೀಗೆ ವರ್ತಿಸುತ್ತಿದ್ದರು.ಅವರನ್ನು ದೂಷಿಸುವುದು ಸರಿಯಲ್ಲ ನಮ್ಮದೇ ತಪ್ಪು,ನಮ್ಮ ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳದೆ,ರಾಜ್ಯದ ಆರೋಗ್ಯ ಮಂತ್ರಿಗಳನು ದೂಷಿಸುವುದು ಯಾವ ನ್ಯಾಯ ಅಲ್ಲವೇ? ಸಾಮಾನ್ಯರು ನಾವುಗಳು ನಮ್ಮ ಇತಿ-ಮಿತಿಗಳನು ಅರಿತು ಮಾತನಾಡುವುದ ಕಲಿಯಬೇಕು ಮೊದಲು.
ಬಾಬ ಆಮ್ಟೆಯಂಥ ಮಹಾನ್ ಜೀವಿಗಳು ಬೀದಿಯಲಿ ಬಿದ್ದು ನರಳಾಡುತ್ತಿದ್ದ 'ಕುಷ್ಟ ರೋಗಿಯ'ವೇದನೆಯನ್ನು ಕಂಡು,ಅಂದಿನಿಂದಲೇ ತನ್ನ ಜೀವಮಾನವಿಡಿ ಕುಷ್ಟರೋಗಿಗಳ 'ಕಲ್ಯಾಣಕ್ಕಾಗಿಯೇ' ದುಡಿದು,ಪರರ ಸೇವೆಯೇ ದೇವರ ಕಾರ್ಯವೆಂಬಂತೆ ಬದುಕಿ ಸಾವಿರಾರು ನಿರ್ದಯಿ,ನಿರ್ಗತಿಕರಿಗೆ ಸ್ವಾವಲಂಬನೆಯ ಬದುಕ ದಾರಿ ತೋರಿಸಿ,"ಆನಂದವನ"ಎಂಬ ಸ್ವಯಂ ಸೇವಾ ಶಿಬಿರವನು ಕಟ್ಟಿ ಬೆಳಸಿ,ಅಲ್ಲಿ ಬಂದ ವಿಕಲಚೇತನರೆಲ್ಲ ಸ್ವಾಭಿಮಾನಿಗಳಾಗಿ ಬದುಕುವಂತೆ,ಸಾವಿರಾರು ಅನಾಥರಿಗೆ ಪೋಷಕರಾಗಿ ಅವರ ಬಾಳನು ಹಸನಾಗಿಸಿ,ಕೊನೆಯವರೆಗೂ ತನ್ನಲ್ಲಿಗೆ ಬಂದವರ ನೋವಿಗೆ ಸ್ಪಂಧಿಸಿದ ಜೀವಾತ್ಮರಿದ್ದ ನಾಡಿನಲ್ಲಿ ಇಂತಹ 'ಆರೋಗ್ಯ ಮಂತ್ರಿ' ಇದ್ದಾರೆ ಎಂಬುದು ಇಂದಿನ ವಾಸ್ತವದ ವಿಪರ್ಯಾಸವಷ್ಟೆ.
ಅವರುತಾನೇ ಏನ ಮಾಡಿಯಾರು ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾರೆ,ಅದು ಅಲ್ಲದೆ ಬಳ್ಳಾರಿಯ ಕೋಟ್ಯಾಂತರ ರೂಪಾಯಿಯ ಅವರ ವ್ಯವಹಾರವ ಬಿಟ್ಟು ಇಲ್ಲಿ ಯಾರೋ ಒಬ್ಬ ಸಾಮಾನ್ಯನ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ.ಹಾಗಾಗಿ ಸಾಮಾನ್ಯರೇ ನೀವುಗಳೇ ಸ್ವಲ್ಪ ಸಹಿಸಿಕೊಂಡು,ಅವರೊಂದಿಗೆ ಸಹಕರಿಸಿ ಅನ್ನೋದು ನಾನೊಬ್ಬ ಭವ್ಯ ಭಾರತದ ಮತದಾರನಾಗಿ ನಿಮ್ಮಲ್ಲಿ ಮಾಡುವ ವಿಜ್ಞಾಪನೆ.





