Thursday, January 5, 2012
Tuesday, December 13, 2011
ಚಿತ್ರ ಸಂತೆ.
ಹುಡುಕುತ ನಿಂತೆ
ಎದೆಯಾಳದಲಿ ಹುದುಗಿರುವ
ನೆನಪಿಗೆ ಬಣ್ಣವ
ಕುಂಚ ಮೂಡಿಸಿದ
ವಯ್ಯಾರ ಚಿತ್ರಗಳ
ಹರಾಜಿನಲ್ಲಿಟ್ಟು
ಬೆಲೆ ಕಟ್ಟುತಿರುವರು
ಸುತ್ತಲು ಭಾವದ ಬಣ್ಣಕ್ಕೆ!
ಬಗೆ ಬಗೆಯ ಬಣ್ಣಗಳ
ಚಿತ್ರ ರಾಶಿ
ಸಂಜೆ ಗೋಧೂಳಿಯಲಿ
ಆವರಿಸಿದ ಮಬ್ಬನು
ಕಾಯುವ ಕುರಿಗಳಿಗೆ
ತಿಳಿಸಿ ಹೆಜ್ಜೆ ಕೂಡಿಸಿದ
ಹಳ್ಳಿ ಹೈದನ ಬಿರುಸಿಗೆ
ಹೊಂಬಣ್ಣ ಬಳಿದ
ಪಡುವಣದ ಸೂರ್ಯ.
ಚಿತ್ರಕಾರನ ನೋಟಕೆ ನಾಚಿ
ಬಿರಿದ ಮಾಸಲೊಪ್ಪದ ತುಂಟನಗೆ
ಬಿಗುವಾದ ಅವಳೆದೆಯಲಿ
ಅರಳಿದ ಕಾಮನೆಗಳಿಗೆ
ಬಣ್ಣ ರಾಶಿ ಹಾಕಿ
ಚಿತ್ರ ಸಂತೆಯಲಿ ಹುಡುಕುತಲಿರುವನು
ಕೂತು ಕಾಮನಬಿಲ್ಲ
ಕನಸುಗಾರ!
Saturday, November 26, 2011
ಮೋಹದ ಮರುಕ
ನನ್ನದಲ್ಲದ ಭಾವಕೆ
ನಿನ್ನದಲ್ಲದ ಮಾತಿಗೆ
ಸಾಕ್ಷಿ ಮಾತ್ರ
ನಾನು-ನೀನು.
```````````````````````````
ಕೂತು ತೂಕಡಿಸಲು ಬಿಡದು
ನಿನ್ನ ನೆನಪು!
ಮಮಕಾರಕು ಮರುಕವುಟ್ಟುವುದು
ನನ್ನ ಕಂಡು!
``````````````````````````
ಸುಡುವ ಬಿಸಿಲು
ಮೈಮನವ ತರಗುಡಿಸುವ ಶೀತದಲೋ
ಮುಸಲಧಾರೆಯಲೋ ಕೊಚ್ಚಿ ಹೋಗದೆ
ನೀನು ಮಾತ್ರ ಯಾಕೆ ಉಳಿದೆ 'ನೆನಪೇ'
```````````````````````````````````````````
ನಿನ್ನ ತನುವಿನ
ಆಸರೆಗೆ ದೂಡುವ
ಚಳಿಯನು ದೂಷಿಸದೆ
ನನ್ನ ತೆಗಳುವ ಜಗದ
ಬಗ್ಗೆ ನನಗೇಕೋ ಮರುಕ!
``````````````````````````````````````
Thursday, November 3, 2011
ಆವರಿಸಿದ ಛಾಯೆ!
ವೇದನೆಯ ಆರದ ಗೊಳು ಆಲಿಸಲೋ
ಅಸಾಧ್ಯ ಹಿಂಸೆ, ಒಡಲಾಳದಲಿನ
ನಿನ್ನ ನೋವು ಬರಿದಾಗದೇ
ಉಮ್ಮಳಿಸುತಿಹ ನಿನ್ನ ರೋದನೆ.
ಮರುಗುವ ಜೀವಗಳಿಗೋ
ಜಗದ ನೋವಲ್ಲಿ ಮುಳುಗುತಲಿಹ
ಹೊಸ ಆಕ್ರಂದನ, ಆಲಿಸಿದಷ್ಟು
ಇಮ್ಮಡಿಸುವ ಬೇಸರ,
ಇನ್ನಾವುದೋ ನೆವದಲಿ ಪಲಾಯನಕೆ
ದಾರಿ ಹುಡುಕುವ ಮರುಕ ಮನ!
ನಿನಗಾದರೂ ಸಹ ಮತ್ತೇನೂ
ಅಸಹಾಯಕತೆಯ ವ್ಯಕ್ತವೊಂದೇ
ಉಳಿದಿಹುದು ಬದುಕಲಿ ಎನುವ
ಪರಿಯಲಿ ದನಿ ಸೋತು
ಕ್ಷೀಣಿಸಲು, ಬತ್ತಿರುವ ಹನಿಯ
ಕಣ್ಣಲೂ ಜಗಕೆ ಕಂಗೊಳಿಸುತಿಹ
ಶೂನ್ಯವು! ಕಾರಣವೇ ತಿಳಿಯದೆ
ನೊಂದ ಮನಕೆ ಆವರಿಸಿದ
ಛಾಯೆ ದುಗುಡ!
Sunday, October 2, 2011
ಶಿಖರವನೇರುತ...
ಶಿಖರವನೇರುತ...ತುಂಗ ಉತ್ತುಂಗವ ಆವರಿಸಿ
ಮುಗಿಲ ಮುತ್ತಿಕ್ಕುವ ತವಕದ
ವನಸಿರಿಯ ಹಬ್ಬಿತಬ್ಬಿಹ
ಮುತ್ತ ಹನಿಯ ಚಿರ ಜಳಕದಲಿ
ತೊನೆಯುತ ಹಸಿರ ಚಿಮ್ಮುವ
ಮಬ್ಬು ಕಾನನದ ನೀರವದಲಿ
ಅಲೆಮಾರಿಯ ಅಸ್ಪಸ್ಟ
ಹೆಜ್ಜೆಗುರುತುಗಳು
ಮೆದು ನೆಲದಮೇಲೆ
ಅಸಂಬದ್ದ ಚಿತ್ರವ
ಮೂಡಿಸುತ
ಕವಿದ ಮೋಡದೊಳಗಣ
ಹಾದಿಯ ಹರಸುತ
ಶಿಖರದೆತ್ತರವ ಏರುತ ಏರುತ
ಮನ ನಿರಾಳ,ನಿರ್ಮಲ
ಹಗುರತೆಯ ಧನ್ಯ ಭಾವವ
ಸ್ಪುರಿಸಲು, ನಿಸರ್ಗದೊಡಲ
ಅನಪೇಕ್ಷಿತ ಮಮಕಾರವು
ಎನ್ನ ಸ್ಮೃತಿಯ ಕಾನನವ
ಆವರಿಸಲು;ಜೀವವು
ಗರಿಕೆಯ ಕುಡಿಯಂತೆ ತೃಣವು.
ಹೆಜ್ಜೆಗುರುತುಗಳು
ಮೆದು ನೆಲದಮೇಲೆ
ಅಸಂಬದ್ದ ಚಿತ್ರವ
ಮೂಡಿಸುತ
ಕವಿದ ಮೋಡದೊಳಗಣ
ಹಾದಿಯ ಹರಸುತ
ಶಿಖರದೆತ್ತರವ ಏರುತ ಏರುತ
ಮನ ನಿರಾಳ,ನಿರ್ಮಲ
ಹಗುರತೆಯ ಧನ್ಯ ಭಾವವ
ಸ್ಪುರಿಸಲು, ನಿಸರ್ಗದೊಡಲ
ಅನಪೇಕ್ಷಿತ ಮಮಕಾರವು
ಎನ್ನ ಸ್ಮೃತಿಯ ಕಾನನವ
ಆವರಿಸಲು;ಜೀವವು
ಗರಿಕೆಯ ಕುಡಿಯಂತೆ ತೃಣವು.
ತನುಮನ ತನ್ಮಯವು
ಪ್ರಕೃತಿ ಸೊಬಗ ರಸಜೇನ
ಸವಿಯಲು;ನನ್ನ ಕಣಕಣವು
ಲೀನವು ಪ್ರಕೃತಿ ಪರಬ್ರಮ್ಹನ
ಸಮಷ್ಟಿಯೋಳು.
ದಿಗಂತ ಮೀರಿದ ಭುವಿಯೊಡಲ
ಹರವನೇರಿ, ನೆಲಮುಗಿಲ
ಸಮಾಸಮದ ಅನನ್ಯ
ವಿಸ್ಮಯದೊಳಗಿನ ಬಿಂದು
ಭವಬಂಧನದೀ ಜೀವವು .
Wednesday, August 31, 2011
ಸ್ಪರ್ಶ..ಮೌನ!
ಕಾಯುವ ಹಪಾ ಹಪಿಯಲ್ಲೇ
ದಿನ ದೂಡುವ ಬದುಕಿಗೆ
ಇನ್ನಾವ ಹೊಸ ಅರ್ಥವನ್ನು
ನೀಡುವ ಹುಚ್ಚುತನ ನನ್ನಲ್ಲಿ ಉಳಿದಿಲ್ಲ!
~~~~~~~~~~~~~~~~~~
ನನ್ನವರ ಕಂಡಾಗ
ಅವರ ಮುಖದಲಿ
ಹೊಳೆವ ಸ್ವಚ್ಛಂದ ನಗುವಿನ
ಚೈತನ್ಯ ನನ್ನ ಸ್ವಾತಂತ್ರ.
ಅವರ ಮುಖದಲಿ
ಹೊಳೆವ ಸ್ವಚ್ಛಂದ ನಗುವಿನ
ಚೈತನ್ಯ ನನ್ನ ಸ್ವಾತಂತ್ರ.
~~~~~~~~~~~~~~~~~
ನದಿಯ ದಡದಲಿ ನಿಂತ
ಏಕಾಂತದಲಿ ನನ್ನ ಕೂಡಿದ
ಹಕ್ಕಿ ನುಡಿಯಿತು;
ನಿನ್ನ ಹಾಗೇ ನನಗೂ
ಇದುವೇ ಜೀವನ, ಇದರಲ್ಲೇ ಬದುಕು!
~~~~~~~~~~~~~~~~~
ಆವರಿಸಿದ್ದ ಮೌನದ ನಡುವೆ
ಮಾತನಾಡಿದ್ದು ಮಾತ್ರ
ಸ್ಪರ್ಶ!
Monday, August 8, 2011
ಜೀವಕೆ ಭಾವ!
ಜೀವಕೆ ಭಾವ!ಸಲ್ಲಾಪದ ನಡುವೆ ನಿನ್ನ ಏಕಾಂತ!
ನಿನ್ನ ಕಾಲ ಬೆರಳ ಸೋಕಿ
ತೆರಳುತಿಹ ಅಲೆಯ ಪುಳಕ
ಕಂಡ ಪ್ರತಿ ಅಲೆಯು
ನಿನ್ನತ್ತ ತೆವಳಲು
ನೀ ನಿಂತ ನೆಲೆ, ನದಿಯ ಸೆಳೆತಕೆ
ಸಿಗದ ದಡದ ಬಿಂದು
ಅಲ್ಲಿ ನೀನಿತ್ತ ಸ್ಪರ್ಶದಲೇ ಉಳಿದಿಹ
ಭೂಮಿ ತೂಕದ ಎದೆಯ ಭಾರ!
ನಿಸರ್ಗದ ಮೃದು ನಿನ್ನ ತನ
ಮೆಲ್ಲಗೆ ಮಂಜು ಹೂವಿನ ಎಳೆಯ ಮೇಲೆ
ಮೂಡಿಸಿದ್ದು ಮಾತ್ರ ಹನಿಯ ಚಿತ್ತಾರ.
ಬಸುವಿನ ಹುಳು ತನ್ನ ದಾರಿಯಲಿ
ಗೆರೆ ಎಳೆದು ಬಿಡಿಸಿದ್ದು ಮಾತ್ರ
ಸರಳಾತಿಸರಳ ರೇಖೆ.
ಆವರಿಸಿಹ ಮೌನದ ನಡುವೆ
ಮಾತನಾಡಿದ್ದು ಮಾತ್ರ ಸ್ಪರ್ಶ!
ಇದೆಲ್ಲದರ ನಡುವೆ ನಿನ್ನಲ್ಲಿ
ಉಳಿದಿಹುದು ಮಾತ್ರ
ಜೀವಕೆ ಭಾವ!
ಭಾವಕೆ ಜೀವ!
ಎಚ್.ಎನ್. ಈಶಕುಮಾರ್
Subscribe to:
Posts (Atom)


