Saturday, December 26, 2009

ಬಿಡಿ ಬಿಡಿ ಕವಿತೆಗಳು















ನನ್ನ ಪದಗಳಿಗೆ ಮಿಡಿವ
ನಿನ್ನ ಮನದ ಭಾವಗಳೇ
ನನ್ನ ಕವಿತೆಯ ಜೀವಾಳ
ಕವನದ ಸೆಲೆಯೇ ನೀ

ಆಗಿರುವಾಗ ನೀ ಇಲ್ಲದೆ

ಪದಗಳಿಗಾವ ಜೀವ ಗೆಳತಿ..
*********************************
ಅದೆಲ್ಲೋ ಬಾಳೇ ತೋಟದ
ಹಸಿರ ನಡುವೆ ಬಳಕುತ

ನಿಂತ ಚೆಲುವೆ ನೀ
ಕರೆಯಲು ಕಾಡುವ ಕಂಗಳ
ಸನ್ನೆಯಲೇ ಮರುಳಾದೆ
ನಾ ನಿಂತ ನಿಲುವಲೇ...

**************************************
ನಿನ್ನ ಮೌನ ಮಾತಾದಾಗ
ಮಲ್ಲಿಗೆ ಅರಳಿತು ಸಂಜೆಯಲಿ..

ನಿನ್ನ ಕನಸು ನನಸಾದಾಗ
ನನ್ನ ಬದುಕು ಹಿತವೆನಿಸಿತು
ಮುಸಂಜೆಯ ಮಬ್ಬಿನಲಿ.....

******************************************
ನಿ
ನ್ನೊಂದಿಗೆ ದಿನರಾತ್ರಿ ಕಳೆವ
ಕನಸು ನನಸಾದ ದಿನದ
ನೆನಪ ಭಾರ ಹೊತ್ತು ಹೊತ್ತು
ದಿನದೂಡುತ್ತಿರುವ ವಿರಹಿಯ
ಸವಿ ನೋವ ನಿವೆದಿಸುತಲೇ
ಹುಣ್ಣಿಮೆಯ ಚಂದಿರ ಒಮ್ಮೆಗೆ
ಮರೆಯಾದ ಮೋಡದ ಮರೆಯಲಿ..

Wednesday, December 16, 2009

ಒಂದು-ನೂರರ....ಅಂತರ

ಒಂದು-ನೂರರ....ಅಂತರ


ಯಾಕೆಂಬುದೆ ತಿಳಿಯದ ಹಾಗೇ
ಎಚ್ಚರವೆಂಬುದು ನೆಪ ಮಾತ್ರ
ಮತ್ತೆ ಮತ್ತೆ ಮೈ ಮರೆವು
ಸಂಜೆ ಸೂರ್ಯನೊಡನೆ ಕಣ್ಣಾಮುಚ್ಚಾಲೆಯಾಡಲು
ಕಪ್ಪನೆ ಮೋಡ ಬುವಿಯಲೆಲ್ಲ
ಕೆಂಬಣ್ಣದ ತಂಪು,ಮನದಲೋ ಮಂಪರು.

ನೀ ಮೋಡದಂತೆ ಆವರಿಸಿ
ಮಳೆಯಂತೆ ಜಿನುಗಿ ಮರೆಯಾಗಿ
ಮರೆಯಲು, ನನ್ನ ಬದುಕು
ಒಂಟೆತ್ತಿನ ಗಾಡಿಯಾ ಹಾಗೇ
ಸಾಗುತ್ತಲೇ ಇದೆ ಅನವರತ.
ಅದೇನೋ ವಿಪರ್ಯಾಸ! ಅಣಕಿಸಿದೆ
ಹೊಟ್ಟೆಯ ಜೀತದ ಪ್ರತಿದಿನದ ಜೂಟಾಟಿಕೆ.
ಸೋಲು ಸಾವಲ್ಲ! ಜೀವನವೇರಿದ
ಘಟ್ಟವ ಸೂಚಿಸುವ ಮೈಲಿಗಲ್ಲು.

ನಾ ಮರೆಯಲೊಲ್ಲದ ಜೀವಮಾನದ
ಸೋಲು ನೀ, ಅಂದು ದಾರಿ ತಪ್ಪಿದವಗೆ
ಹಾದಿ ತೋರಿದ ಸೂಚನಫಲಕ.
ಸಂಬಂಧಗೂಡದ ಆ ಕಹಿ ಅನುಭವದ
ಶೂನ್ಯಭಾವಕೆ ಕಿಚ್ಚನ್ನ ಹಚ್ಚಿದಲ್ಲವೇ
ನಿನ್ನ ಅಗಲಿಕೆ.ಆ ವಿರಹದ
ಬೇಗೆಯಲಿ ಚಿಗುರೊಡೆದ ನನ್ನ
ಜೀವನ ಸೂಚ್ಯಂಕದ ಮೊದಲಂಕಿ ನೀನು.


ನೀ ಅಗಲಿ ದೂರಾದರೇನು?
ಬದುಕು ಎಲ್ಲಿಂದ ಪ್ರಾರಂಭವಾದರೇನು?
ನನ್ನ ನಿನ್ನ ನಡುವಿರುವುದು
ಒಂದು-ನೂರರ ನಡುವಿನ ಅಂತರ.

ಎಚ್.ಎನ್.ಈಶಕುಮಾರ್

Thursday, December 10, 2009

ಅರಿವಿರದ ಪಯಣವೇ...












ತೀರದ ಮನದ ಬಯಕೆಗಳು
ಕೊನೆಗಾಣದ ಅಪರಿಮಿತ ಬವಣೆಗಳು
ದಣಿವರಿಯದ ಅನಿಶ್ಚಿತಿತ ದಾಹಗಳು
ಕಣ್ಣ ಅಂಚಿನಲೆ ಬಿಂಬವಾಗಿ
ಕೂತು ಕಾಡುವ ಕಾಮನೆಗಳು
ಕೊನೆ ಕ್ಷಣದವರೆಗೂ ಅಂತಿಮ ತಾಣವ
ಕಾಣದ ಅರಿವಿಲ್ಲದ ಸುಧೀರ್ಘ
ಪಯಣವೇ ಜೀವನವ?



ಬದುಕ ದೋಣಿ ನೀರ ಅಲೆಗಳ ಮೇಲೆ ಅತ್ತಿಂದಿತ್ತ-ಇತ್ತಿಂದಿತ್ತ ತೋಯುತ್ತ, ನನ್ನ ಅಂತಿಮ ತಾಣವೆಲ್ಲೋ ಎಂದು ಮನಸಿನಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೆಂಬಂತೆ ದೂರದ ದಿಗಂತದತ್ತ ಒಂದು ನೋಟ ಬೀರಿ ಅಲ್ಲಿರಬಹುದೇನೋ ನನ್ನ ಜೀವನದ ವಿಶ್ರಾಂತ, ನೆಮ್ಮದಿಯ ತಾಣ ಎಂದುಕೊಳ್ಳುತ್ತ, ತನ್ನ ಮನಸನ್ನು ತಾನೇ ಸಮಾಧಾನ ಪಡಿಸಿಕೊಳ್ಳುತ್ತ ಸಾಗುತ್ತಿತ್ತು. ಎಲ್ಲಿಯೂ ನಿಲ್ಲಲು ಮನಸಿಲ್ಲ, ಪಯಣದ ದಾರಿಯ ಬಿಟ್ಟು ಅಂತಿಮ ನೆಲೆ ಎಲ್ಲೆಂಬುದು ಸ್ಪಷ್ಟವಿಲ್ಲ, ಎಂದಾದರು ಒಂದು ದಿನ ಸಿಕ್ಕಬಹುದೆಂಬ ಆಶಾಭಾವದ ಭ್ರಮೆಯಲಿ ಸಿಲುಕಿ, ಆಶಾಭಾವವೇ ಜೀವನ ಸೆಲೆಯನು ಹೆಚ್ಚಿಸಿ ತನ್ನ ಪಯಣ ಮುಂದುವರೆಸಿದೆ. ಪಯಣ ಮಾತ್ರ ಸಾಗಿದೆ ಅದರ ಮಹತ್ವದ ಅರಿವಿಲ್ಲ. ತನ್ನ ಚೇತನ ಎಲ್ಲಿಯವರೆಗೂ ಮುನ್ನಡೆಸುತ್ತದೋ ಅಲ್ಲಿಯವರೆಗೂ ಸಾಗುತ್ತೇನೆ ಎಂಬ ಸಂಕಲ್ಪ ದೇಹಕ್ಕೆ.

ದೇಹ-ಮನಸುಗಳ ಸಾಂಗತ್ಯವೇ ವಿಭಿನ್ನ. ದೇಹದ ದಣಿವಿಗೆ ಮನಸಿನ ಸ್ಪೂರ್ತಿಯೇ ಔಷದ. ಮನಸಿನ ಅಭಿಲಾಷೆಗಳಿಗೆ ತಕ್ಕಂತೆ ತನ್ನನು ತಾನೇ ಹುರಿದುಂಬಿಸಿಕೊಳ್ಳುತ್ತ, ದೇಹ ಮನಸಿನ ತಾಣದ ಹುಡುಕಾಟದಲ್ಲಿ ಮುನ್ನಡೆಯುತ್ತದೆ. ದೇಹ-ಮನಸುಗಳ ನಡುವಿನ ಸಂಭಂದವೇ ಅಂತಹುದು. ಒಂದು ರೀತಿಯ ಬಿಟ್ಟು ಬಿಡದ ಅವಿನಾಭಾವ ಸಂಭಂದ. ಆದರೂ ವೈರುದ್ಯವಾಗಿ ಅವುಗಳ ನಡೆ. ತನ್ನದೇ ಆದ ಆಕಾರ, ಮೂರ್ತತೆಯ ದೇಹಕ್ಕೆ ತನ್ನದೇ ಈರ್ಷ್ಯೆ, ಬಯಕೆಗಳು ಕಡಿಮೆ ಆದರೇ ಮನಸಿಗೆ ತನ್ನದೇ ಆದ ಮೂರ್ತ ಅಸ್ಥಿತ್ವ ಇಲ್ಲವಾದರೂ ಅದರ ಬಯಕೆಗಳು ಈರ್ಷ್ಯೆಗಳು ಅಪಾರ. ಮನಸಿನ ವಾಂಛೆಗೆ ಮಿತಿಯೇ ಇಲ್ಲ. ಅಂತಹ ಮನಸನ್ನು ಸಾವಧಾನದ ಸ್ಥಿಥಿಯಲ್ಲಿರಿಸುವುದು ಅಸಾಧ್ಯದ ಸಂಗತಿ ಮತ್ತು ಮಾನವನಿಗಿರುವ ಬದುಕಿನ ಹೋರಾಟ.

ಜೀವನವೆಂಬ ನಿತ್ಯ ಚಲನೆಯಲಿ ದೇಹ-ಮನಸುಗಳ ಮಿಳಿತದ ಸಾಗಾಟವಿದ್ದರು ಮೂರ್ತ ರೂಪದ ದೇಹದ ಚಟುವಟಿಕೆಗಳಿಗೆ ಮನಸಿನ ಅಮೂರ್ತ ಶಕ್ತಿಯ ಬೆಂಬಲ ಅಪಾರ. ಬದುಕಿನ ನಿರಂತರ ಯುದ್ದದಲಿ ಎಂಬಿಡದೆ ಸೈನಿಕರಂತೆ ಕಾದಾಡುತ್ತ ಸಾಗುವ ಮಾನವನ ಎರಡು ಶಕ್ತಿಗಳು ಅವನ ಸೋಲು-ಗೆಲುವು, ಏಳು-ಬಿಳುಗಳಲ್ಲಿ ಮಹತ್ವದ ಪಾತ್ರದಾರಿಗಳು. ದೇಹ-ಮನಸುಗಳು ಎರಡು ನಮ್ಮಯ ಏಳು-ಬಿಳುಗಳಿಗೆ ಕಾರಣವಾದರು ಅವುಗಳಿಂದ ಉಂಟಾಗುವ ಸುಖ-ದುಖಗಳಲ್ಲಿ ಮನಸಿನ ಭಾಗಿತ್ವವೇ ಅಧಿಕ. ನಮ್ಮ ಸೋಲು-ಗೆಳವುಗಳಿಗೆ ಮನ ಸಂವೇದನೆಯಾಗಿ ವರ್ತಿಸುತ್ತದೆ. ಎಲ್ಲ ಫಲಾನುಫಲಗಳನ್ನು ಮನಸು ಅನುಭವಿಸುತ್ತದೆ. ಸಾಂಘಿಕ ಕಾರ್ಯದಲ್ಲಿ ಅಮೂರ್ತ ಚೇತನವಾದ ಮನಸಿನ ಕಾರ್ಯ ಅಧಿಕ. ಮಾನವ ಜೀವನದ ಏಳಿಗೆಯಲ್ಲಿ ಸದೃಢ ಮನಸು ಕೆಲಸ ಮಾಡುತ್ತದೆ. ಅದರಿಂದಾಗಿಯೇ ನಮ್ಮ ಮನಸನ್ನು ಸದೃಢ ಗೊಳಿಸಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ನಮ್ಮಯ ಜೀವನ ಯಾನ ಸಾಗಲಿ...

Thursday, December 3, 2009

ಚುಟುಕ!

ಮನದ ಯೋಚನ ಲಹರಿಯೇ ವಿಚಿತ್ರ. ಅಂತಹ ವಿಚಿತ್ರಕ್ಕೆ ಸಾಕ್ಷಿ ಚುಟುಕ. ಚುಟುಕವನ್ನ ಓದಿ, ಹೊಗಳಿಕೆ,ತೆಗಳಿಕೆಗಳನ್ನ ಕಾಮೆಂಟ್ ಮಾಡಿ ನೇರವಾಗಿ ನನ್ನನ್ನು ದೂಷಿಸಬೇಡಿ ಇದು ನನ್ನ ತಪ್ಪಲ್ಲ ನನ್ನ ಮನದ ತಪ್ಪು.

ಅಪಶಕುನ!!


ಎದುರು ಮನೆಯ
ಬೆಳ್ಳನೆಯ ಹುಡುಗಿ
ತೊನೆದಾಡುತ ಗೇಟಿನ
ಬಳಿ ಬರಲು
ಎದುರಿನ ಎಲೆಕ್ಟ್ರಿಕ್ ತಂತಿಯ
ಮೇಲಿದ್ದ ಕಾಗೆಗೆ
ಅಪಶಕುನದ ಭಾಸವಾಯ್ತು.

Wednesday, November 25, 2009

ಪ್ರತಿಬಾರಿಯೂ ನಾವೇಕೆ ಸೋಲುತ್ತೇವೆ?

ಆಡಳಿತದಲ್ಲಿ ಲೋಪಗಳ ತಡೆಯಲು, ಅಧಿಕಾರದ ವಿಕೇಂದ್ರಿಕರಣದ ಮುಖೇನ ಉತ್ತಮ ಆಡಳಿತ, ಮನೆಯಮುಂದಕ್ಕೆ ಆಡಳಿತ ಎಂಬ ಧೈಯದೊಂದಿಗೆ, ಪ್ರಜಾಪ್ರಭುತ್ವದ ಆಡಳಿತಾಧಿಕಾರವನು ಹಂತ
ಹಂತವಾಗಿ ವಿಂಗಡಿಸಿ ಆಡಳಿತ ಯಂತ್ರವನು ಚುರುಕುಗೊಳಿಸಿ ಬೇಗ ಬೇಗ ಜನರ ಕಷ್ಟಗಳಿಗೆಸ್ಪಂಧಿಸುವ ಧೈಯ ನಮ್ಮ ಸರ್ಕಾರಗಳದ್ದು.
ಜನರ ಕುಂದು-ಕೊರತೆಗಳ ನಿವಾರಿಸುವ, ಅವರ ಕಷ್ಟ-ನಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಸರ್ಕಾರ ತನ್ನ ಪುಟ್ಟ ಪುಟ್ಟ ಘಟಕಗಳಂತೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್,ತಾಲ್ಲೂಕು ಕಛೇರಿ, ಜಿಲ್ಲಾ ಕಛೇರಿಗಳನ್ನ ಸ್ಥಾಪಿಸಿದೆ. ಘಟಕಗಳ ಮೂಲಕ ಜನರ ಕೆಲಸ ನಿರ್ವಹಿಸುತ್ತಿರುವ ಸರ್ಕಾರವಿಂದು ನಿಜಕ್ಕೂ ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ, ಜನರ ಹಿತವನ್ನು ಕಾಯುವ ಕೆಲಸ ,ಮಾಡುತ್ತಿವೆಯ? ನಮ್ಮ ದೇಶದಲಿಂದು ಅಧಿಕಾರದ ವಿಕೇಂದ್ರಿಕರಣದ ಸಣ್ಣ ಸಣ್ಣ ಘಟಕಗಳು ಜನರ ಕೆಲಸಗಳನು ಮಾಡುತ್ತಿವೆಯ?ಅವುಗಳಿಗೆಲ್ಲ ಅಂತ ಅಧಿಕಾರ ಇದೆಯಾ? ಇಲ್ಲವ? ಯಾವ ಯಾವ ಸಮಯದಲಿ ಯಾವ ಯಾವ ಘಟಕಗಳುಹೇಗೆ ಕೆಲಸ ಕಾರ್ಯಗಳನು ಹಮ್ಮಿಕೊಳ್ಳಬೇಕು, ಏನೇನೂ ಕ್ರಮಗಳನ್ನು ಅನುಸರಿಸಬೇಕುಎಂಬುದು ನಿರ್ದ್ರಿಷ್ಟವಾಗಿ ಇದೆಯಾ? ಇದ್ದರೆ ಅವಗಡಗಳನ್ನು ನಿಭಾಯಿಸುವಲ್ಲಿ ಪ್ರತಿಭಾರಿಯೂ ನಾವೇಕೆ ಸೋಲುತ್ತೇವೆ. ನೋವಿನಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲಲು ನಮ್ಮ ಸರ್ಕಾರಗಳಿಗೆಕೆ ಸಾಧ್ಯವಾಗುವುದಿಲ್ಲ? ಅದು ಅಷ್ಟೆಲ್ಲ ಸರ್ಕಾರದ ಘಟಕಗಳಿದ್ದುಎಂಬುದೇ ನನ್ನ ಪ್ರಶ್ನೆ.

ಇಂದು ಗ್ರಾಮ ಮಟ್ಟದಿಂದ ಹಿಡಿದು ಶಾಸಕರವರೆಗೆ ಜನರ ಪ್ರತಿನಿಧಿಸುವ ಜನಪ್ರತಿನಿಧಿಗಳು,ಗ್ರಾಮಲೆಕ್ಕಿಗರು,ದಂಡಾಧಿಕಾರಿಗಳು,ಜಿಲ್ಲಾಧಿಕಾರಿಗಳು,ಸಚಿವರು ಹೀಗೆ ಆಯಾ ಹಂತವನ್ನು ಪ್ರತಿನಿಧಿಸುವ ನಾಯಕರು ಸರ್ಕಾರಿ ಅಧಿಕಾರಿಗಳು, ನೌಕರರು ಇರುವ ಸುಸಜ್ಜಿತವಾದ ವ್ಯವಸ್ಥೆ ಮಾಡುವುದಾದರೂ ಏನನ್ನ. ಅಧಿಕಾರದ ದುರ್ಬಳಕೆ ಆಗದಿರಲಿ,ಒಂದೇ ಕಡೆ ಕೇಂದ್ರಿತವಾಗದಿರಲಿ ಎಂದು ವಿಘಟನೆ ಗೊಳಿಸಿದ ಆಡಳಿತ ಯಂತ್ರ ಸರಿಯಾಗಿಸಮಯೋಚಿತ ಕಾರ್ಯಗಳನು ನಿರ್ವಹಿಸದೆ ಇದ್ದಲ್ಲಿ ಅವುಗಳಿದ್ದು ಲಾಭವೇನು?
ರೈತರು, ಬಡ ಕೂಲಿಕಾರರು, ಸಣ್ಣ ಸಣ್ಣ ಹಿಡುವಳಿದಾರರೆ ಹೆಚ್ಚಾಗಿರುವ ಕೃಷಿಯನೆ ನಂಬಿಬದುಕುವ ಉತ್ತರದ ಕರ್ನಾಟಕದ ಹಳ್ಳಿಗಲೆಲ್ಲ ನೆರೆ ಹಾವಳಿಗೆ ಸಿಲುಕಿ ಅವರ ' ಬದುಕುಮೂರಾಬಟ್ಟೆಯಾದಸಮಯದಲಿ'ಸರ್ಕಾರದ ಘಟಕಗಳು ಸಂತ್ರಸ್ತರ ನೆರವಿಗೆ ಪರಿಣಾಮಕಾರಿಯಾಗಿ ಸ್ಪಂಧಿಸದೆ ದಿನದೂಡುತ್ತ, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದುಭರವಸೆಗಳನ್ನ ನೀಡುತ್ತ, ಇಂದು ಬೀದಿ ಪಾಲಾದ ಜನರಿಗೆ ಪರಿಹಾರಗಳನ್ನು ಒದಗಿಸದೆ ಸಭೆನಡೆಸಿ, ಸಮೀಕ್ಷೆ ನಡೆಸಿ, ತಿರ್ಮಾನ ಕೈಗೊಂಡು ವರುಷಗಳು ಕಳೆದ ನಂತರ ಸಂತ್ರಸ್ತತರು ಕಳೆದುಕೊಂಡ ಆಸ್ತಿಯ ನಾಲ್ಕನೇ ಒಂದು ಭಾಗದಷ್ಟೋ ಅಥವಾ ಅವರಿಗೆ ತೋಚಿದಷ್ಟು ಪರಿಹಾರನೀಡಿದರೆ ಅದರಿಂದಾಗುವ ಒಳಿತಾದರು ಏನು?
ತಮ್ಮ ಮನೆ ಮಠ, ಆಸ್ತಿ, ಬೆಳೆ,ದಾಸ್ತಾನು ಎಲ್ಲವು ನೀರು ಪಾಲಾಗಿ ಬದುಕು ಕಳೆದು ಕೊಂಡಜನರ ಬದುಕು ಕಟ್ಟಿಕೊಡುವ ಹೊಣೆಯಾದರು ಯಾರದ್ದು? ಅವರವರ ನೋವಿಗೆ ಅವರವರೆ ಪಾಲುದಾರರು.ಯಾವುದೇ ಪಕ್ಷದ ಸರ್ಕಾರವಿರಲಿ, ಯಾವುದೇ ಸರ್ಕಾರ ಬರಲಿ, ಹೋಗಲಿ ಶ್ರೀ ಸಾಮಾನ್ಯನಬವಣೆ, ಜಂಜಾಟ, ನೋವುಗಳಿಗೆಎಂದಿಗೂ ಪರಿಹಾರ ಅಸಾಧ್ಯ. ಜನ ನಾವುಗಳು ಶಕ್ತರಾಗದಹೊರತು ಯಾರಿಂದಲೂ ಬದಲಾವಣೆ ಎಂಬುದು ಸಾಧ್ಯವಿಲ್ಲ ನಮ್ಮ ನಾಡಿನಲ್ಲಿ ಎಂಬುದುಸರ್ವಕಾಲಿಕ ಸತ್ಯ ಎಂಬುದು ಮತ್ತೆ ಮತ್ತೆ ಸಾಬೀತಾದ ಅಂಶ.
ಜನರ ನೋವಿಗೆ ಸ್ಪಂಧಿಸುವುದೇ ನನ್ನ ಮೊದಲ ಆಶಯ, ಗುರಿ ಎಂದು ಬಡಾಯಿ ಬಾರಿಸುವ ನಾಯಕರೆಲ್ಲ ಅವರಿವರ ಮೇಲೆ ಗೂಬೆ ಕೂರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ. ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ವರಿಸಿದರೆ, ಸಚಿವರುಗಳುಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರೆ, ಅಧಿಕಾರಿಗಳು ಸರ್ಕಾರದಿಂದ ಸಮರ್ಪಕವಾದ ನೆರವು ಬಂದಿಲ್ಲ ಎಂದು ಆರೋಪಿಸಿ ಒಬ್ಬರನ್ನು ಇನ್ನೊಬ್ಬರು ತೆಗಳುವವರೆ.ಯಾರ ಮಾತು ಸತ್ಯ ಯಾರ ಮಾತು ಸುಳ್ಳು ಎಂಬುದ ತಿಳಿಯದ ಸಾಮಾನ್ಯ ಮಾತ್ರ ಪ್ರತಿಬಾರಿಯೂ ತಾ ಮಾಡಿದ ಮತದಾನವನ್ನೇ ಶಪಿಸುತ್ತ ಸುಮ್ಮನಾಗುತ್ತಲೇ ಇದ್ದಾನೆ. ಇದು
ಅಧಿಕಾರದ ದುರ್ಬಳಕೆಯೋ,
ಕರ್ತವ್ಯದ ಲೋಪವೋ , ಎಂಬ ಗೊಂದಲದಲ್ಲಿ ನಾ ಇದ್ದೇನೆ.

ಲೇಖನ: ಸೃಜನ

Wednesday, November 18, 2009

ವೈದ್ಯೋ ಬರಹಗಾರ!


ಸಾಹಿತ್ಯದ ಸೆಳೆವೆ ಅಂತದ್ದು. ಅರಿತವರೆ ಬಲ್ಲರು ಅದರ ಸಾಂಗತ್ಯದ ಪರಿವನ್ನ. ಮಳೆಯಲಿ ನೆಂದು ಬಂದ ಹಳ್ಳಿಯ ಹುಡುಗ,ಸ್ನಾನದ ಒಲೆಯ ಮುಂದೆ ಕೂತು ಬೆಂಕಿಯ ಕಾಯಿಸುವಾಗಿನ ಬೆಚ್ಚನೆ ಭಾವವ ಅನುಭವಿಸುವಷ್ಟೇ ಸೊಗಸು ಕಥೆ,ಕವನಗಳ ಸಾಂಗತ್ಯ. ಬಿಟ್ಟು ಬಿಡದ ನಂಟು ಅದು. ವೃತ್ತಿಯಲ್ಲಿ ವೈದ್ಯರಾಗಿರುವ ಹಿರಿಯರು, ಸ್ನೇಹಿತರು ಆಗಿರುವ ದೀಪಕ್ ರವರ ಸಾಹಿತ್ಯದ ಬಗೆಗಿನ ಗೀಳನ್ನು ನೋಡಿದರೆ ನನಗೆ ಹೀಗೆ ಅನಿಸುವುದು. ಅವರೊಟ್ಟಿಗೆ ಹರಟುವಾಗಲೆಲ್ಲ ಜೀವನದ ಬಗೆಗೆ, ಸಮಾಜದ ಆಗು-ಹೋಗುಗಳ ಬಗ್ಗೆ,ಅನುಭವಗಳ ಬಗೆಗಿನ ಅವರ ಒಳನೋಟಗಳು ನನಗೆ ವಿಶಿಷ್ಟ ಅನಿಸುತ್ತವೆ. ಅವರೊಂದಿಗೆ ಮಾತನಾಡುವಾಗಲೆಲ್ಲಾ ಇವರು ಅಪ್ಪಿ ತಪ್ಪಿ ವೈದ್ಯರಾಗಿಬಿಟ್ಟಿದ್ದಾರೆ,ಇಲ್ಲವೇ ನಮ್ಮ ಹಾಗೇ ಪಾಠ ಮಾಡಿಕೊಂಡು ಅದು ಇದು ಮನಸಿಗೆ ತೋಚಿದ್ದ ಗೀಚಿಕೊಂಡು ಇರುತ್ತಿದ್ದರೆನೋ? ಎಂದೆನಿಸುವುದು.
ಅವರು ವೈದ್ಯರಾಗಿ ರೋಗಿಗಳಿಗೆ ಗುಳಿಗೆ ನೀಡಿ,ಯಾವ ಯಾವ ರೋಗಗಳ ಗುಣಮುಖ ಮಾಡುತ್ತಾರೋ ನನಗಂತು ತಿಳಿಯದು. ಅವರೊಳಗಿನ ಕವಿ ಮನಸ್ಸು ಮತ್ತೆ ಮತ್ತೆ ನನ್ನ ಚಕಿತ ಗೊಳಿಸುವುದು. ವೃತ್ತಿ ಯಾವುದಾದರೇನು ಪ್ರವೃತ್ತಿಯಲ್ಲಿ ಅವರು ನನ್ನ ಒರಗೆಯವರೇ ಅನ್ನಿಸುವುದೇ ನನಗೆ ತೃಪ್ತಿ. ಅವರು ಬರೆದ ಒಂದು ಪುಟ್ಟ ಕವನವನ್ನು ನಿಮ್ಮ ಓದಿಗೆ ಬಿಡುತ್ತಿದ್ದೇನೆ,ಓದಿ ನಿಮ್ಮ ಅನಿಸಿಕೆಗಳ ತಿಳಿಸಿ....


ನಿನ್ನ ಹುಡುಕಿದೆ


ನಿನ್ನ ಹುಡುಕಿದೆ.... ಪ್ರಿಯಾ
ಹುದುಗಿದ ನೆನಪಿನೊಳಗೆ
ಜೀವನದ ಪುಟದಲಿ,
ಕಳೆದ ಸಮಯದಲಿ,
ನಿಸ್ತಂತು ಪಿಸುಮಾತಲಿ,
ಖಾಲಿ ವಿಸ್ಕಿ ಸೀಸೆಯಲಿ,
ಕಳೆದ ಸಿಗರೇಟು ಧೂಮದಲಿ,
ನೆನಪಿನಲಿ ಇರಿದು ಕೊಯ್ವ ನಿನ್ನ ಸೆಲೆ
ನನ್ನಬದುಕನ್ನೇ
ಅಂತರ್ಮುಖಿಯಾಗಿಸುತ್ತಿರುವುದ
ನಾನೇಕೆ ತಿಳಿಯಲಿಲ್ಲವೇ,
ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತಿ?

Tuesday, November 10, 2009

ಕವನ ಮಾಲೆ






ಜೀವನದಲ್ಲಿನ ವೈರುಧ್ಯಗಳು ಅಪಾರ, ನಮ್ಮ ಮನ ಬಯಸುವುದೊಂದು ವಾಸ್ತವದಲಿ ನಡೆಯುವುದೇ ಇನ್ನೊಂದು. ಆದರೂ ಅಂತಹ ಭ್ರಮೆಗಳಲೆ,ಕನಸುಗಳ ಸರಮಾಲೆಯ ಜೊತೆಯೇ ವೈರುಧ್ಯಗಳ ಜೀವನದ ಬಂಡಿ ಸಾಗಿದೆ ಎಡಬಿಡದೆ,ಅಲ್ಲವೇ...ನನ್ನ ಕವನಗಳಲು...




ಒರೆ ನೋಟವ ಬೀರಿ ಹಾಗೆ ನಡೆದೆ
ಹಿಂತಿರುಗಿ ನನ್ನ ದಾರಿಯೆಡೆಗೊಮ್ಮೆ
ನೋಡದೆ ನಡೆದೆ, ಆ ತಿರುವಿನಲಿ
ನೀ ಕಾಣದೆ ಮರೆಯಾದುದಷ್ಟೆ
ದುರಂತವಲ್ಲ ನನ್ನ ಜೀವನದೀ,
ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ..
*************************************

ಅವನ ಕೈ ಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ ಹಕ್ಕಿಯ
ಸ್ವಚ್ಚಂದ ಹಾರಟವನು ಆನಂದಿಸಲಾಗದೆ
ವಿರಹದ ಬೇಗೆಯಲಿ ಬಳಲಿದನಂತೆ
ಅಮರ ಪ್ರೇಮ ತ್ಯಾಗಿ....
***************************************

ನಿನಗಾಗಿ ಕಾಯುವ ಆ ಸರಿ ಹೊತ್ತಲಿ
ಬದುಕು ಹಾಗೆ ಸ್ಥಂಭವಾಗಲಿ ಗೆಳತಿ
ನಿನಗಾಗಿನ ನಿರೀಕ್ಷೆ, ಕಾಯುವ ಕಾತರಿಕೆಗೆ
ಮುಪ್ಪಡರುವುದಿಲ್ಲ, ನನ್ನ ಭಾವಕು
ಚಿರ ಯೌವ್ವನ, ನಿನಗೋ ಸಂಧಿಸಲವಣಿಸುವ
ಚಿರಂತನ ಯಾನ.....
****************************************