Friday, July 10, 2009




ಮೈಸೂರಿನಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಕೋಮು ಗಲಭೆ ಎಂತವರನ್ನೂ ಕಲಕದೇ ಇರಲಾರದು.

"ಧರ್ಮ ಅಫೀಮು ಇದ್ದಂತೆ"ಎಂದಿದ್ದ ಕಾರ್ಲ್ ಮಾರ್ಕ್ಸ್. ಧರ್ಮಾಂದತೆ ಅಫಿಮಿಗಿಂತಲೂ ಭೀಕರವಾದ ಪರಿಣಾಮ ಬೀರುತ್ತಿದೆ. ಧರ್ಮಾಂದತೆಅಮಲಿನಲಿ, 'ಮಾನವೀಯತೆಯನು' ಬೂದಿಯಾಗಿಸುತಿಹ ಜನರೇ ತಮ್ಮ ತಮ್ಮ ದಾರುಣ ಕಥೆಯ ಸಾವು -ನೋವು ಬಿಂಬಿಸುವ ಪಾತ್ರಧಾರಿಗಳಾಗುತ್ತಿದ್ದಾರೆ. ಮಾನವ ಮಾನವನ ಜೀವವನೆ ಆಹುತಿ ಪಡೆಯುತಿಹ ಧರ್ಮವಿಂದು ಮನುಜ ಮತವನ್ನೇ ಮರೆಮಾಸುತ್ತಿದೆ. ಇಂತಹ ಯೋಚನಾ ಲಹರಿಯಲಿ ಮೂಡಿಬಂದ ಕವನವಿದು ; "ಮನುಜನಿಲ್ಲ".


ಮನುಜನಿಲ್ಲ!!

ಕಳೆದು ಹೋಗಿದ್ದಾನೆ
ಮನುಜ ಜಗದಲಿಂದು
ಸಿಗುವರು ಕೇವಲ ಹಿಂದೂ,
ಕ್ರೈಸ್ತ,ಮುಸಲ್ಮಾನ ರಸ್ಟ್ಟೆ
ನಮ್ಮೊಳಗಿಂದು.


ಪ್ರೀತಿ,ಪ್ರೇಮ,ಸಹಕಾರದ
ಸಹಬಾಳ್ವೆ ಇಲ್ಲ!
ಇಹುದು ಕೇವಲ
ಗುಡಿ,ಚರ್ಚು,ಮಸೀದಿಗಳು
ನಮ್ಮೊಡನೆ ಇಂದು.


ಗಂಟೆ, ಗೋಪುರ, ಗುಂಬಜ,
ಶಿಲುಬೆಗಳ ನಾಡಿನಲಿ
ಉಸಿರುಗಟ್ಟಿ ಪರಿತಪಿಸಿ
ಸತ್ಹಿದೆ ಮಾನವತೆಯು!
ಗುಡಿ,ಚರ್ಚು, ಮಸಿದಿಗಳಲಿ
ಮನಃ ಶಾಂತಿಗೆ ಪ್ರಾರ್ಥಿಸಿ
ಫಲವೇನು? ಹತವಾಗಿದೆ
ಮಾನವೀಯ ಧರ್ಮವಿಂದು
ಓ ಧರ್ಮಾಂದರೆ!!

ಎಚ್.ಎನ್.ಈಶಕುಮಾರ್

5 comments:

ನವೀನ್ ಹಳೇಮನೆ said...

good one...recurring tone...
but look for spelling mistakes...
Welcome to blog world...

prasad C.B said...

ತುಂಬಾ ಚನ್ನಾಗಿದೆ .

Vivek said...

The present view of society.. very nice..

ಸೀತಾರಾಮ. ಕೆ. / SITARAM.K said...

ಅದ್ಭುತ ಬರವಣಿಗೆ.

Unknown said...

thumba arthagarbithavagide